- Последний пост
- 13 авг.
- Последнее чтение
- 13 авг.
- Постов за неделю
- 6
- Всего постов
- 20
- Тип
- открытый
- Язык
- kn
- В каталоге с
- 13 авг.
- 1/24сутки в ленте
- 336
- 1/48двое суток
- 385
- 1/72трое суток
- 415
Оценка по просмотрам недавних постов: пост набирает почти всё за первые сутки.
Посты
без подписи
без подписи
без подписи
без подписи
без подписи
2026-27 II PUC MODEL QUESTION PAPER https://dpue-exam.karnataka.gov.in/kseabdpueqpue/PuModelQP27
без подписи
без подписи
без подписи
без подписи
ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚನ್ನಮ್ಮ ನಿಧನ: ದೊಡ್ಮನೆ ಸಂಸಾರದ ಬೆನ್ನೆಲುಬಾಗಿದ್ದ ಗಟ್ಟಿಗಿತ್ತಿ ಇನ್ನಿಲ್ಲ ಬೆಂಗಳೂರು: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಅವರ ಧರ್ಮಪತ್ನಿ, ಆದರ್ಶ ಗೃಹಿಣಿ ಚನ್ನಮ್ಮ (85) ಅವರು ಜುಲೈ 18ರ ಶನಿವಾರದಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕೆಲ ವರ್ಷಗಳಿಂದ ಉಸಿರಾಟ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರಾದ ಹಿನ್ನೆಲೆಯಲ್ಲಿ, ಕಳೆದ ಜುಲೈ 15ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಜ್ಞ ವೈದ್ಯರಾದ ಡಾ. ಸತ್ಯನಾರಾಯಣ ಅವರ ನೇತೃತ್ವದಲ್ಲಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಚನ್ನಮ್ಮ ಅವರಿಗೆ ಸತತ ಚಿಕಿತ್ಸೆ ನೀಡಲಾಗುತ್ತಿತ್ತಾದರೂ, ಚಿಕಿ*ತ್ಸೆ ಫಲಕಾರಿಯಾಗದೆ ಅವರು ಶನಿವಾರ ಇಹಲೋಕ ತ್ಯಜಿಸಿದರು. ದೇವೇಗೌಡರ ಬದುಕಿನ ಬೆನ್ನೆಲುಬು ಹಾಸನ ತಾಲೂಕಿನ ಮುತ್ತಿಗೆ ಹಿರೇಹಳ್ಳಿಯ ಕಾಳಮ್ಮ ಮತ್ತು ದೇವೇಗೌಡ ದಂಪತಿಯ ಹಿರಿಯ ಪುತ್ರಿಯಾಗಿದ್ದ ಚನ್ನಮ್ಮ ಅವರು ಅಂದಿನ ಕಾಲದಲ್ಲೇ ಎಸ್ಎಸ್ಎಲ್ಸಿವರೆಗೆ ಶಿಕ್ಷಣ ಪೂರೈಸಿದ್ದರು. ಮನೆಯ ಹಿರಿಯ ಮಗಳಾಗಿ ನಾಲ್ವರು ಸಹೋದರರು ಹಾಗೂ ಮೂವರು ಸಹೋದರಿಯರಿಗೆ ತಾಯಿಯಂತೆಯೇ ಆಸರೆಯಾಗಿದ್ದವರು. 1954ರ ಮೇ 25ರಂದು ಹೆಚ್.ಡಿ. ದೇವೇಗೌಡರ ಜೊತೆ ಇವರ ವಿವಾಹ ನಡೆದಿತ್ತು. ಅಂದಿನಿಂದ ಸದಾ ರಾಜಕೀಯ ಕಾರ್ಯಕಲಾಪಗಳಲ್ಲಿ ಬ್ಯುಸಿಯಾಗಿದ್ದ ದೇವೇಗೌಡರಿಗೆ ಕುಟುಂಬದ ಯಾವುದೇ ಹೊರೆ ಬೀಳದಂತೆ ಇಡೀ ಸಂಸಾರವನ್ನು ಒಂಟಿಯಾಗಿ ನಿಭಾಯಿಸಿದ ಹೆಗ್ಗಳಿಕೆ ಚನ್ನಮ್ಮ ಅವರದ್ದಾಗಿದೆ. ದೇವೇಗೌಡರು ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಿಯಾಗಿ ಬೆಳೆಯುವಲ್ಲಿ ಇವರ ಪಾತ್ರ ಅನನ್ಯವಾಗಿತ್ತು. ಆರು ಮಕ್ಕಳ ಆದರ್ಶ ಮಾತೆ ಮೃತರಾದ ಚನ್ನಮ್ಮ ಅವರಿಗೆ ನಾಲ್ವರು ಪುತ್ರರಾದ ಹೆಚ್.ಡಿ. ರೇವಣ್ಣ (ಮಾಜಿ ಸಚಿವ), ಹೆಚ್.ಡಿ. ಕುಮಾರಸ್ವಾಮಿ (ಕೇಂದ್ರ ಸಚಿವ), ಹೆಚ್.ಡಿ. ಬಾಲಕೃಷ್ಣ, ಹೆಚ್.ಡಿ. ರಮೇಶ್ ಗೌಡ ಹಾಗೂ ಇಬ್ಬರು ಪುತ್ರಿಯರಾದ ಶೈಲಜಾ ಮತ್ತು ಅನಸೂಯಾ ಸೇರಿದಂತೆ ಒಟ್ಟು ಆರು ಜನ ಮಕ್ಕಳಿದ್ದಾರೆ. ಆರು ಮಕ್ಕಳನ್ನು ಸಲಹಿ, ಅವರಿಗೆ ಉತ್ತಮ ಶಿಕ್ಷಣ ಕೊಡಿಸಿ ಸಮಾಜದಲ್ಲಿ ದೊಡ್ಡ ಸ್ಥಾನಕ್ಕೆ ತೇರ್ಗಡೆಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಆ್ಯ*ಸಿಡ್ ದಾ*ಳಿಗೂ ಬೆದರದಾಕೆ 2001ರ ಫೆಬ್ರವರಿ ತಿಂಗಳಲ್ಲಿ ಚನ್ನಮ್ಮ ಅವರು ತಮ್ಮ ಸ್ವಗ್ರಾಮ ಹರದನಹಳ್ಳಿಯ ದೇವಾಲಯದಲ್ಲಿ ಪೂಜೆ ಮುಗಿಸಿ ವಾಪಸ್ ಬರುತ್ತಿದ್ದಾಗ ಅವರ ಮೇಲೆ ದುಷ್ಕ*ರ್ಮಿಗಳಿಂದ ಆ್ಯ*ಸಿಡ್ ದಾ*ಳಿ ನಡೆದಿತ್ತು. ಈ ಘಟನೆಯಲ್ಲಿ ಗ*ಭೀರವಾಗಿ ಗಾ*ಯಗೊಂಡಿದ್ದರೂ, ಧೃತಿಗೆಡದೆ ಚಿಕಿ*ತ್ಸೆ ಪಡೆದು ಗುಣಮುಖರಾಗಿ ಹೊರಬರುವ ಮೂಲಕ ತಮ್ಮ ಮಾನಸಿಕ ದೃಢತೆಯನ್ನು ಸಾಬೀತುಪಡಿಸಿದ್ದರು. ಸರಳತೆ ಹಾಗೂ ಧೀಮಂತಿಕೆಗೆ ಹೆಸರಾಗಿದ್ದ ಚನ್ನಮ್ಮ ಅವರ ಅಗಲಿಕೆಗೆ ರಾಜಕೀಯ ಗಣ್ಯರು, ಗಣ್ಯಾತಿಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.
без подписи
без подписи
без подписи
🙏
без подписи
без подписи
без подписи
без подписи
без подписи